File:Gavimath God.jpg
Original file (1,280 × 853 pixels, file size: 390 KB, MIME type: image/jpeg)
Captions
Summary
[edit]DescriptionGavimath God.jpg |
English: ಅತ್ಯಂತ ಪಾವನ ಪುಣ್ಯ ಕ್ಷೇತ್ರವಾದ ತ್ರೀಪುರಾಂತ--ಬಸವಕಲ್ಯಾಣದ ಶ್ರೀ ಘನಲಿಂಗರುದ್ರಮುನಿ ಗವಿಮಠದಲ್ಲಿ ಪ್ರತಿ ವರ್ಷ ಮಹಾಲಯ ಅಮವಾಸ್ಯೆಯಿಂದ ವಿಜಯ ದಶಮಿ ವರೆಗೆ (ಶಕ್ತಿ ದೇವಿಯ ಆರಾಧನೆ ಸಮಯದಲ್ಲಿ) ಹಾಗೂ ಪ್ರತಿ ವರ್ಷ ಉಗಾದಿ ಪಾಡ್ಯದಿಂದ ಮಹಾದೇವನ ಬಾರಸಿ ವರೆಗೆ (ಹೊಸ ವರ್ಷದ ಮೊದಲನೇ ದಿವಸದಿಂದ ಬಾರಸಿ ವರೆಗೆ ಶಿವನ ಆರಾಧನೆ ಸಮಯದಲ್ಲಿ) ,ಕಲಿಯುಗದಲ್ಲಿಯ ರಂಭಾಪುರಿ ಪೀಠದ ೨ನೇ ಜಗದ್ಗುರುಗಳಾದ ಘನಲಿಂಗರುದ್ರಮುನಿ ಶಿವಾಚಾರ್ಯರ ಕ್ರತೃ ಗದ್ದುಗೆ, ಸುಮಾರು 50ಅಡಿ ಆಳವಾದ ಗುಹೆಯಲ್ಲಿದ್ದು, ಅದರ ಮೇಲೆ ಅವರ ಹಿತ್ತಾಳೆ ಮೂರ್ತಿ ಸ್ಥಾಪಿಸಲ್ಪಟ್ಟಿರುವದು. ಈ ಮೂರ್ತಿಯ ಮೇಲೆ ಸುಮಾರು ೨೦ ನಿಮಿಷಗಳ ವರೆಗೆ ಸೂರ್ಯ ನಾರಾಯಣನು, ಸೂರ್ಯೋದಯ ಸಮಯದಲ್ಲಿ ತನ್ನ ಹೊಂಗಿರಣಗಳಿಂದ ಪ್ರಕಾಶ ಗೊಳಿಸುವ ಅದ್ಭುತ ಘಟನೆ ನಿರಂತರ ಪ್ರತಿವರ್ಷ ಜರಗುತ್ತದೆ. ನಾನು ಈ ವರ್ಷದ ಮಹಾಲಯ ಅಮವಾಸ್ಯೆ ದಿನಾಂಕ 8 ಹಾಗೂ 9 ಅಕ್ಟೋಬರ ದಂದು ನನ್ನ ಧರ್ಮ ಪತ್ನಿ ಹಾಗೂ ನನ್ನ ಗೆಳೆಯ ರಾದ RK.ಫೋಟೋ ಸ್ಟುಡಿಯೋದ ಯಜಮಾನರು ಹಾಗೂ ಶ್ರೀ ಸೂರ್ಯಕಾಂತ ಶೀಲವಂತ ಪ್ರಿನ್ಸಿಪಾಲರು ಪುಣ್ಯ ಕೋಟಿ ಕಾಲೇಜು ಬಸವಕಲ್ಯಾಣ ಹಾಗೂ ಇನ್ನಿತರರ ಜೊತೆ ಈ ಅಮೋಘ ಸನ್ನಿವೇಶದ ದ್ರಶ್ಯಾವಳಿಯ ದರುಷನ ಪಡೆದು ಧನ್ಯರಾದೆವು.
ಶ್ರೀ ಘನಲಿಂಗರುದ್ರಮುನಿ ಶಿವಾಚಾರ್ಯರು ಈ ಗುಹೆಯಲ್ಲಿ ೧೨ ನೇ ಶತಮಾನದಲ್ಲಿ ತಪೋನುಷ್ಠಾನಗೈದು ಕಾಲಜ್ಞಾನ ಹಾಗೂ ವೀರಶೈವ ಧರ್ಮ ಸಂವಿಧಾನವನ್ನು ರಚಿಸಿರುತ್ತಾರೆ.ಇವರು ತಮ್ಮ ಕಾಲಜ್ಞಾನದಲ್ಲಿ ಒಂದು ಕಡೆ ಹೀಗೆ ಹೇಳಿರುತ್ತಾರೆ, "ಯಾವ ಭಕ್ತ, ಶೃದ್ಧೆಯಿಂದ ನನ್ನ ಕ್ರತೃ ಗದ್ದುಗೆಯ ದರುಷನ ಪಡೆಯುತ್ತಾನೋ ಅವನ ವಿಘ್ನಗಳೆಲ್ಲ ಮಂಜು ಕರಗಿದಂತೆ ದೂರಾಗುತ್ತವೆ ಹಾಗೂ ಅವನ ಕಲ್ಯಾಣ ವಾಗುತ್ತದೆ. ಒಂದು ವೇಳೆ ಯ್ಯಾರದಾದರೂ ಒಬ್ಬರ ದುಖದುಮ್ಮಾನಗಳು ದೂರಾಗಿಲ್ಲ ವೆಂಬುವವರು ಕಂಡರೆ, ಅಂತಹವರ ಕಡೆ ಬೊಟ್ಟು ಮಾಡಿ ತೋರಿಸಿ " ಎಂದು.ಈ ಗದ್ದುಗೆಯ ದರ್ಶನ ಪಡೆದವರ ಕಲ್ಯಾಣ ವಾಗುತ್ತಿರುವ ನಿದರ್ಶನಗಳು ಲೆಕ್ಕವಿಲ್ಲದಷ್ಟಿವೆ.ಇದು ಕಾಲ್ಪನೀಕವಾಗಿರದೆ,ಇಲ್ಲಿ ನಿರಂತರ ಘಟಿಸುತ್ತಿರುವ ಪವಾಡ ಸದೃಶ ಘಟನಾವಳಿಗಳಾಗಿವೆ. ೧೨ ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯಾದಾಗ ಘನಲಿಂಗರುದ್ರಮುನಿ ಶಿವಾಚಾರ್ಯರು ತನ್ನ ಶಿಷ್ಯಳಾದ,ಬಸವಣ್ಣನವರ ಧರ್ಮ ಪತ್ನಿ ಗಂಗಾಂಬಿಕೆಯ ನೇತೃತ್ವದಲ್ಲಿ ಶರಣರನ್ನೂ ಹಾಗೂ ವಚನ ಸಾಹಿತ್ಯದ ಕಟ್ಟುಗಳನ್ನು ಉಳವಿವರೆಗೆ ಒಯ್ದು ಸುರಕ್ಷಿತವಾಗಿ ಬಿಟ್ಟು ಬಂದಿರುತ್ತಾರೆ. ಒಂದು ವೇಳೆ ಈ ಮಹತ್ಕಾರ್ಯ ಅಂದು ಇವರಿಂದ ನಡೆಯದಿದ್ದರೆ, ನಮ್ಮ ಧರ್ಮ ಹಾಗೂ ವಚನ ಸಾಹಿತ್ಯ ಇವತ್ತು ಕಾಣಸಿಗುತ್ತಿದ್ದಿಲ್ಲ. ಅಂದಿನಿಂದ ಇಂದಿನವರೆಗೂ ಈ ಗವಿಮಠದ ಪರಂಪರೆಯಲ್ಲಿ ಅನೇಕ ಮಹನೀಯರು ಬಾಳಿಬೆಳಗಿದ್ದಾರೆ.ದಿನಾಂಕ 28--9--2005 ರಂದು,ಶ್ರೀ ರಂಭಾಪುರಿ ಜಗದ್ಗುರುಗಳಾದ ಶ್ರೀ ವೀರಸೋಮೇಶ್ವರ ಭಗವತ್ಪಾದರ ಹಾಗೂ ಶ್ರೀ ಕೇದಾರ ಜಗದ್ಗುರುಗಳಾದ ಶ್ರೀ ಭೀಮಾಶಂಕರ ಭಗವತ್ಪಾದರ ನೇತೃತ್ವದಲ್ಲಿ ಈ ಗವಿಮಠದ ಪಟ್ಟಾಧಿಕಾರ ನೆರವೇರಲ್ಪಟ್ಟಿತು. ಶ್ರೀ ಷ.ಬ್ರಹ್ಮ ಅಭಿನವಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ ಈ ಶ್ರೀ ಮಠದ ಪಟ್ಟಾಧಿಕಾರ ಕಟ್ಟಲಾಯಿತು. ಇವರು ಬಾಲತಪಸ್ವಿಗಳಾಗಿದ್ದು, ಇವರ ಪಟ್ಟಾಧಿಕಾರದ ಪೂರ್ವದಲ್ಲಿ ಈ ಗವಿಮಠದಲ್ಲಿ ಆಗಿ ಹೋದ ಎಲ್ಲಾ ಪೂರ್ವಾಚಾರ್ಯರ ತಪೋನಿಧಿಗೆ, ಹಾಗೂ ಅವರ ಅಲೌಕೀಕ ಸಂಪತ್ತಿಗೆ ಇವರು ಒಡೆಯರಾಗಿದ್ದು ಮಹಾನ ತೇಜಸ್ವಿಗಳಾಗಿ ಕಂಗೊಳಿಸುತ್ತಿದ್ದಾರೆ. ಇವರ ದರುಷನ ಆಶೀರ್ವಾದ ಪಡೆದ ಸದ್ಭಕ್ತರ ಕಲ್ಯಾಣ ವಾಗುತ್ತಿದೆ. ಇವರು ಬಸವಕಲ್ಯಾಣ ನಾಡಿನಲ್ಲಿ ಲೋಕಕಲ್ಯಾಣಾರ್ಥ ಹಾಗೂ ವಿಶ್ವ ಶಾಂತಿಗಾಗಿ ತಪೋನುಷ್ಠಾನ ಮಾಡುತ್ತ ಧರ್ಮ ಜಾಗೃತಿ ಮಾಡುತ್ತಿದ್ದಾರೆ. ಇವರು ಅತ್ಯಂತ ಸರಳ ಹಾಗೂ ಸಾತ್ವಿಕ ಜೀವಿಗಳಾಗಿದ್ದು,ತ್ರೀಕಾಲ ಪೂಜಾನಿಷ್ಟರಾಗಿದ್ದಾರೆ. ಶರಣಪ್ಪಾ ಜಿ. ಬಿರಾದಾರ |
Date | |
Source | Own work |
Author | Basavakalyangavimath |
Licensing
[edit]- You are free:
- to share – to copy, distribute and transmit the work
- to remix – to adapt the work
- Under the following conditions:
- attribution – You must give appropriate credit, provide a link to the license, and indicate if changes were made. You may do so in any reasonable manner, but not in any way that suggests the licensor endorses you or your use.
- share alike – If you remix, transform, or build upon the material, you must distribute your contributions under the same or compatible license as the original.
File history
Click on a date/time to view the file as it appeared at that time.
Date/Time | Thumbnail | Dimensions | User | Comment | |
---|---|---|---|---|---|
current | 11:47, 9 February 2020 | 1,280 × 853 (390 KB) | Basavakalyangavimath (talk | contribs) | User created page with UploadWizard |
You cannot overwrite this file.
File usage on Commons
There are no pages that use this file.